ಬೋಧಿಸತ್ವ ಬುದ್ಧ ಫೌಂಡೇಶನ್: ಗುರಿ ಮತ್ತು ಉದ್ದೇಶಗಳು

  • 1. ವಿಶ್ವಕ್ಕೆ ಶಾಂತಿಸಂದೇಶ ನೀಡಿದ ಬುದ್ಧಗುರುವಿನ ತತ್ವ-ಚಿಂತನೆ, ಬೋಧನೆ, ಉಪದೇಶಗಳ ಸಾರವನ್ನು ಪ್ರಚಾರಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
  • 2. ಬುದ್ಧಧಮ್ಮವನ್ನು ಪ್ರಾಚಾರ ಮಾಡುವುದು. ದೇಶದ ವಿವಿಧ ಭಾಗಗಳಲ್ಲಿ ಬುದ್ಧಧಮ್ಮಕ್ಕೆ ಸಂಬಂಧಿಸಿದ ಆರಾಧನ ಕೇಂದ್ರಗಳು ಹಾಗೂ ಧ್ಯಾನ ಮಂದಿರಗಳನ್ನು ತೆರೆಯುವುದು.
  • 3. ಬೌದ್ಧಧಮ್ಮಕ್ಕೆ ಮತಾಂತರವಾಗುವವರಿಗೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸುವುದು.
  • 4. ಬೌದ್ಧಧಮ್ಮ ದೀಕ್ಷೆ ತೆಗೆದುಕೊಂಡವರಿಗೆ ನಂತರದ ದಿನಗಳಲ್ಲಿ ಧಮ್ಮ ಪಾಲನೆಯ ರೀತಿ-ನೀತಿ, ಆಚಾರ-ವಿಚಾರ, ಸಂಪ್ರದಾಯ-ನಂಬಿಕೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಗಾರ, ಉಪನ್ಯಾಸಗಳನ್ನು ಏರ್ಪಡಿಸುವುದು.
  • 5. ಬೌದ್ಧಧಮ್ಮಕ್ಕೆ ಮತಾಂತರವಾಗುವವರಿಗೆ ಇರುವ ಸಂವಿಧಾನಿಕ ಹಾಗೂ ಕಾನೂನಾತ್ಮಕ ರಕ್ಷಣೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು.
  • 6. ಬುದ್ಧಧಮ್ಮವನ್ನು ಕುರಿತಂತೆ ಅಧ್ಯಯನ, ಸಂಶೋಧನೆಗೆ ಹೆಚ್ಚಿನ ಪ್ರೋತ್ಸಾಹಿಸುವುದು. ಈ ಕುರಿತಾದ ಅಧ್ಯಯನ, ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿಗೆ ಸಹಾಯಧನ ನೀಡುವುದು.
  • 7. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ ಬೌದ್ಧಧಮ್ಮವನ್ನು ತಿಳಿಯುವ ಮತ್ತು ಪ್ರಸಾರಗೊಳಿಸುವ ನಿಟ್ಟಿನಲ್ಲಿ ಪ್ರವಾಸ ಕಾರ್ಯಕ್ರಮಗಳನ್ನು ರೂಪಿಸುವುದು.
  • 8. ಬೌದ್ಧಧಮ್ಮವನ್ನು ಪ್ರಚಾರಗೊಳಿಸುವ ನಿಟ್ಟಿನಲ್ಲಿ ಭಂತೇಜಿಗಳ ತರಬೇತಿ ಕೇಂದ್ರವನ್ನು ತೆರೆಯುವುದು. ಇದರ ಅಡಿಯಲ್ಲಿ ಕಾರ್ಯಗಾರ, ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮಗಳನ್ನು ರೂಪಿಸುವುದು.
  • 9. ಜಗತ್ತಿನ ವಿವಿಧ ಭಾಗಗಳಿಂದ ಬೌದ್ಧ ಭಂತೇಜಿಗಳನ್ನು ಆಹ್ವಾನಿಸಿ ಅವರಿಂದ ಬುದ್ಧಧಮ್ಮದ ಆಚಾರ ವಿಚಾರ, ಜೀವನ ವಿಧಾನಕ್ಕೆ ಸಂಬಂಧಿಸಿದ ಕಾರ್ಯಗಾರ, ಕಮ್ಮಟ, ವಿಚಾರ ಸಂಕಿರಣ, ಉಪನ್ಯಾಸ ಇನ್ನಿತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರೂಪಿಸುವುದು.
  • 10. ಬುದ್ಧಧಮ್ಮದ ಕುರಿತು ಜಗತ್ತಿನ ವಿವಿಧ ದೇಶಗಳಿಗೆ ತೆರಳಿ ಉಪನ್ಯಾಸ ನೀಡುವವರಿಗೆ ಹಾಗೂ ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುವ ಬೌದ್ಧ ಸಮಾವೇಶಗಳಲ್ಲಿ ಭಾಗಿಯಾಗುವ ಭಂತೇಜಿಗಳು ಹಾಗೂ ಉಪಾಸಕರಿಗೆ ಅಗತ್ಯ ಸೌಲಭ್ಯ ಮತ್ತು ಆರ್ಥಿಕ ಸಹಕಾರ ಕಲ್ಪಿಸುವುದು.
  • 11. ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಬೌದ್ಧ ಸಮಾವೇಶಗಳನ್ನು ಆಯೋಜಿಸುವುದು. ಇದರ ಅಡಿಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಕಂಡುಬರುವ ಬೌದ್ಧಧಮ್ಮ ಕೇಂದ್ರಿತವಾದ ಸಂಸ್ಕøತಿಯನ್ನು ಎತ್ತಿಹಿಡಿಯುವುದು.
  • 12. ಬೌದ್ಧ ಭಂತೇಜಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಕಲ್ಪಿಸುವುದು.
  • 13. ಬುದ್ಧಧಮ್ಮ ಪ್ರಚಾರ ಮತ್ತು ಪ್ರಸಾರಕ್ಕಾಗಿ ಕಾನೂನು ಚೌಕಟ್ಟಿನ ಅಡಿಯಲ್ಲಿ ದೇಶೀಯ ಮತ್ತು ವಿದೇಶಿ ಮೂಲಗಳಿಂದ ಅಗತ್ಯ ಆರ್ಥಿಕ ಸಹಕಾರ ಪಡೆಯುವುದು.
  • 14. ಬುದ್ಧಧಮ್ಮವನ್ನು ಅಧ್ಯಯನ ಮಾಡುವುದಕ್ಕೆ ಹಾಗೂ ಬೌದ್ಧ ಸಾಹಿತ್ಯವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ತೆರೆಯುವುದು.
  • 15. ಭೀಕರ ಯುದ್ಧ, ಭಯೋತ್ಪಾಕರ ಚಟುವಟಿಕೆಗಳನ್ನು ಹತ್ತಿಕ್ಕುವ ಮೂಲಕ ಶಾಂತಿಯನ್ನು ಸಾರುವ ನಿಟ್ಟಿನಲ್ಲಿ ಬುದ್ಧ ಗುರುವಿನ ತತ್ವ-ಚಿಂತನೆಗಳನ್ನು ಸಮಕಾಲೀನ ಬಿಕ್ಕಟ್ಟುಗಳೊಂದಿಗೆ ಅನುಸಂಧಾನಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
  • 16. ಬೌದ್ಧಧಮ್ಮಕ್ಕೆ ಮತಾಂತರವಾಗುವವರಿಗೆ ಹಾಗೂ ಬೌದ್ಧಧಮ್ಮದ ಅಡಿಯಲ್ಲಿ ಸಾಗುವವರಿಗೆ ಎದುರಾಗುವ ಗೊಂದಲ, ಬಿಕ್ಕಟ್ಟು, ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಲಹಾ ಕೇಂದ್ರ ಮತ್ತು ಸಹಾಯವಾಣಿ ಕೇಂದ್ರಗಳನ್ನು ತೆರೆಯುವುದು.
  • 17. ಬೌದ್ಧಧಮ್ಮದ ಆಚಾರ-ವಿಚಾರ, ಆರಾಧನಾ ವಿಧಾನದ ಮೂಲಕ ದಲಿತರು ಹಾಗೂ ಅಸ್ಪøಶ್ಯ ಸಮುದಾಯಗಳಿಗೆ ಸ್ವಾಭಿಮಾನವನ್ನು ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
  • 18. ಬುದ್ಧ ಗುರುವಿನ ವೈಚಾರಿಕ ಚಿಂತನೆಗಳ ಅಡಿಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಮೌಢ್ಯಾಚರಣೆಗಳನ್ನು ತೊಲಗಿಸುವ ಮೂಲಕ ವೈಚಾರಿಕ ಜಾಗೃತಿ ಮೂಡಿಸುವ ನೆಲೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವುದು.
  • 19. ಬುದ್ಧ ಗುರುವಿನ ಜೀವಪರ ಚಿಂತನೆಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಬೀದಿ ನಾಟಕ, ನಾಟಕ, ಯಕ್ಷಗಾನ, ಕಿರುಚಿತ್ರ, ಸಿನಿಮಾ ಹಾಗೂ ಇನ್ನಿತರೆ ರೂಪಕಗಳನ್ನು ನಿರ್ಮಿಸುವುದು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • 20. ಯವಜನತೆಗೆ ಬುದ್ಧ ಗುರುವಿನ ವೈಚಾರಿಕ ಹಾಗೂ ಶಾಂತಿಯ ತತ್ವಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • 21. ಬೌದ್ಧ ಸಾಹಿತ್ಯವನ್ನು ಪ್ರಚಾರ ಹಾಗೂ ಪ್ರಸಾರಗೊಳಿಸುವ ನಿಟ್ಟಿನಲ್ಲಿ ಪ್ರಕಾಶನ ಹಾಗೂ ಮುದ್ರಣವನ್ನು ತೆರೆಯುವುದು.
  • 22. ವೈಚಾರಿಕ ಚಿಂತಕರಾದ ಬುದ್ಧ, ಬಸವ, ವಿವೇಕಾನಂದ, ಫುಲೆ, ಅಂಬೇಡ್ಕರ್, ಪೆರಿಯಾರ್ ಹಾಗೂ ಮುಂತಾದ ಪ್ರಗತಿಪರ ದಾರ್ಶನಿಕ ಚಿಂತಕರುಗಳ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸುವುದು. ಇದರ ಅಡಿಯಲ್ಲಿ ಪ್ರಗತಿಪರ ಚಿಂತಕರ ತತ್ವ-ಚಿಂತನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು.
  • 23. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪೋಷಕರು ಹಾಗೂ ಸಮುದಾಯವನ್ನು ಪೇರೇಪಿಸುವುದು. ಶೈಕ್ಷಣಿಕ ಸಮಸ್ಯೆಗಳು ಹಾಗೂ ಶೈಕ್ಷಣಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾರ್ಯಗಾರ, ವಿಚಾರ ಸಂಕಿರಣಗಳನ್ನು ಆಯೋಜಿಸುವುದು.
    24. ಶಾಲೆ ಬಿಟ್ಟ ಮಕ್ಕಳು, ಅನಾಥ ಮಕ್ಕಳು, ಕಾರ್ಮಿಕರ ಮಕ್ಕಳು ಹಾಗೂ ಬಾಲ ಕಾರ್ಮಿಕ ಮಕ್ಕಳ ಶಿಕ್ಷಣ ಮುಂದುವರಿಕೆಗಾಗಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವುದು.
    25. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸುಧಾರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
    26. ಉದ್ಯೋಗಸ್ಥ ಮಹಿಳೆಯರು, ಅನಾಥ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ಪ್ರಾರಂಭಿಸುವುದು.
    27. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡ ರೋಗಿಗಳು ಹಾಗೂ ಮುಂತಾದವರಿಗೆ ಪೌಷ್ಠಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಹಾರ ಸಾಮಗ್ರಿಗಳನ್ನು ಕಲ್ಪಿಸುವುದು.
    28. ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಇವರಿಗೆ ಸೂಕ್ತವಾದ ವಸತಿ ನಿಲಯಗಳನ್ನು ತೆರೆಯುವುದು.
    29. ರೈತರ ಸಬಲೀಕರಣಕ್ಕೆ ಪೂರಕವಾಗಿ ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸುವುದು. ಹಾಗೆಯೇ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
    30. ಯುವಜನತೆಯನ್ನು ನಿತ್ಯ ಕಾಡುವ ನಿರುದ್ಯೋಗ ಸಮಸ್ಯೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ವೃತ್ತಿಪರ ಶಿಕ್ಷಣ, ವೃತ್ತಿ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಉದಯೋಗಕ್ಕೆ ಸಂಬಂಧಿಸಿದ ತರಬೇತಿ, ಕಾರ್ಯಗಾರಗಳನ್ನು ಆಯೋಜಿಸುವುದು.
    31. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ತರಬೇತಿ ಕೇಂದ್ರಗಳು, ವಾಚನಾಲಯ ಹಾಗೂ ಗ್ರಂಥಾಲಯಗಳನ್ನು ತೆರೆಯುವುದು. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯ ಕಲ್ಪಿಸುವುದು.
    32. ಸಾರ್ವಜನಿಕರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಅರಿವು ಮೂಡಿಸುವುದು. ಆರೋಗ್ಯ ತಪಾಸಣೆ, ರಕ್ತದಾನದಂತಹ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
    33. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ಸಾಹಿತ್ಯಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
    34. ಗ್ರಾಮೀಣ ಹಾಗೂ ನಗರ ಪ್ರದೇಶದ ನಿವಾಸಿಗಳಿಗೆ ಇರುವ ವಿವಿಧ ರೀತಿಯ ನಾಗರಿಕ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು.
    35. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ತರಬೇತಿ, ಕಾರ್ಯಗಾರ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ರೂಪಿಸುವುದು.
    36. ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜ ಸೇವೆಗೆ ಸಂಬಂಧಿಸಿದಂತೆ ಹಿರಿಯ ನಾಗರಿಕರು, ಯುವಜನತೆ, ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಚಟುವಟಿಕೆಗಳನ್ನು ರೂಪಿಸುವುದು.
    37. ಮದ್ಯಪಾನ, ಮಾದಕ ವ್ಯಸನದ ವಿರುದ್ಧ ಜನಾಂದೋಲನ ಕಾರ್ಯಕ್ರಮ ರೂಪಿಸುವುದು. ಮಾದಕ ವ್ಯಸನಿಗಳಿಗಾಗಿ ವ್ಯಸನಮುಕ್ತ ಕೇಂದ್ರಗಳನ್ನು ತೆರೆಯುವುದು.
    38. ದುರ್ಬಲ ವರ್ಗಗಳಿಗೆ ಉದ್ಯೋಗವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆ ಹಾಗೂ ವೃಹತ್ ಕೈಗಾರಿಕೆಗಳನ್ನು ತೆರೆಯುವುದು.
    39. ಅಸ್ಪøಶ್ಯತೆಯ ಆಚರಣೆ ಹಾಗೂ ಅಸ್ಪøಶ್ಯರ ಮೇಲೆ ನಡೆಯುವ ಹಲ್ಲೆ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು. ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ/ವರ್ಗಗಳ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಕಲ್ಪಿಸುವುದು.
    40. ವಿಕಲಚೇತನರ ಕಲ್ಯಾಣ ಸಂಸ್ಥೆಯನ್ನು ಆರಂಭಿಸುವುದು. ಇದರ ಅಡಿಯಲ್ಲಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮವನ್ನು ರೂಪಿಸುವುದು.
    41. ಎಚ್.ಐ.ವಿ, ಏಡ್ಸ್, ಕೋವಿಡ್‍ನಂತಹ ಮಾರಕ ಖಾಯಿಲೆಗಳು, ಪ್ರವಾಹ ಹಾಗೂ ಇನ್ನಿತರೆ ಕಾರಣಗಳಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು. ಹಾಗೆಯೇ ಇಂತಹ ಮಾರಕ ಖಾಯಿಲೆಗಳಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಕಲ್ಪಿಸುವುದು. ಹಾಗೆಯೇ ಎಚ್.ಐ.ವಿ ಪೀಡಿತ ಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯುವುದು.
    42. ಶಾಲಾ ಶಿಕ್ಷಣ, ಶೈಕ್ಷಣಿಕ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವುದು.
    43. ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹಾಗೂ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವ ಸಲುವಾಗಿ ಅಧ್ಯಯನ ಸಾಮಾಗ್ರಿಗಳಾದ ಪುಸ್ತಕ, ಲ್ಯಾಪ್‍ಟ್ಯಾಪ್ ಹಾಗೂ ಇನ್ನಿತರೆ ವಸ್ತುಗಳನ್ನು ನೀಡುವುದು.
    44. ಭಾರತದ ವಿವಿಧ ಭಾಗಗಳಲ್ಲಿ ಸಂಘದ ಶಾಖಾ ಕಛೇರಿಗಳನ್ನು ತೆರೆಯುವುದು.
    45. ಉನ್ನತ ಶಿಕ್ಷಣ ಹಾಗೂ ವಿದೇಶಗಳಲ್ಲಿ ಅಧ್ಯಯನ ಮಾಡಲು ಮುಂದಾಗುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಕಲ್ಪಿಸುವುದು.
    46. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಬಂಧಿಸಿದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುವುದು.
    47. ಹಿರಿಯ ನಾಗರಿಕರು ಹಾಗೂ ಅನಾಥರಿಗಾಗಿ ದೇಶದ ವಿವಿಧ ಭಾಗಗಳಲ್ಲಿ ವೃದ್ಧಾಶ್ರಮಗಳನ್ನು ತೆರೆಯುವುದು.
    48. ಎಚ್.ಐ.ವಿ/ ಏಡ್ಸ್‍ನಂತಹ ಮಾರಕ ಖಾಯಿಲೆಯ ಬಗ್ಗೆ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದು.
  • 49. ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರ ಮತ್ತು ಸಹಯೋಗದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು.
  • 50. ಸಂಸ್ಥೆಯ ಅಡಿಯಲ್ಲಿ ಪುಸ್ತಕ ಪ್ರಕಾಶನ, ನಿಯತಕಾಲಿಕೆ, ದಿನಪತ್ರಿಕೆಗಳು, ಮುದ್ರಣ ಹಾಗೂ ಸುದ್ಧಿ ಮಾಧ್ಯಮವನ್ನು ಆರಂಭಿಸುವುದು.

ಬೋಧಿಸತ್ವಬುದ್ಧ ಫೌಂಡೇಷನ್‌ ನ ವೆಬ್‌ಸೈಟ್‌ ಲೋಕಾರ್ಪಣೆ

ಅರ್ಥಪೂರ್ಣ ಕಾರ್ಯಕ್ಕೆ ಬೆಂಬಲಿಸಿ ದ ತಮಗೆ ಅನಂತ ಧನ್ಯವಾದಗಳು