ಭಾರತದ ಮೂಲಧರ್ಮವಾದ ಬೌದ್ಧಧರ್ಮವು ವೈದಿಕಶಾಹಿಯ ಕುತಂತ್ರದ ಫಲವಾಗಿ ಈ ನೆಲದಿಂದ ವಿಸ್ಮøತಿಗೆ ಗುರಿಯಾಗಿದೆ. ಬೌದ್ಧಧರ್ಮದ ಜೀವಪರ ಮತ್ತು ವೈಚಾರಿಕ ಚಿಂತನೆಗಳಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ಎಂಬುದನ್ನು ಅರಿತ ಆರ್ಯನ್ನರು, ವಿಷ್ಣುವಿನ ದಶಾವತಾರ ಕಲ್ಪನೆಯಲ್ಲಿ ಬುದ್ಧನನ್ನು ಒಂದು ಭಾಗವಾಗಿ ಕಲ್ಪಿಸಿಕೊಂಡು ಕಲ್ಪಿತ ಪುರಾಣಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಬುದ್ಧ ಗುರುವಿನ ಜೀವಪರ ಆಶಯಗಳಿಗೆ ತಿಲಾಂಜಲಿ ಇಟ್ಟು ಅಸಮಾನತೆ, ಅಸ್ಪøಶ್ಯತೆಗಳನ್ನು ಎತ್ತಿಹಿಡಿಯಲಾಗಿದೆ. ಇದರ ಅಡಿಯಲ್ಲಿ ಸಾವಿರಾರು ವರ್ಷಗಳಿಂದಲೂ ದಮನಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಧರ್ಮ ಮತ್ತು ದೇವರ ಹೆಸರಿನಲ್ಲಿ ಶೋಷಣೆಗೆ ಒಳಪಡಿಸಲಾಗಿದೆ.